Connect with us

    LATEST NEWS

    ಗೌರಿ ಲಂಕೇಶ್ ಕೊಲ್ಲಲು ನಕ್ಸಲರಿಗೆ ಯಾವುದೇ ಕಾರಣಗಳಿಲ್ಲ -ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ

    ಗೌರಿ ಲಂಕೇಶ್ ಕೊಲ್ಲಲು ನಕ್ಸಲರಿಗೆ ಯಾವುದೇ ಕಾರಣಗಳಿಲ್ಲ -ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ

    ಉಡುಪಿ ನವೆಂಬರ್ 15 : ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಒಂದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಾಗಿದ್ದು , ಗೌರಿ ಲಂಕೇಶ್ ಹಿಂದೂ ಕೋಮುವಾದದ ಸಂಚಿಗೆ ಬಲಿಯಾಗಿದ್ದಾಳೆ ಎಂದು ನಕ್ಸಲ್ ಆರೋಪ ಹೊತ್ತು ಮುಖ್ಯವಾಹಿನಿಗೆ ಬಂದಿದ್ದ ನೀಲಗುಳಿ ಪದ್ಮನಾಭ ಹೇಳಿದ್ದಾರೆ.

    ಉಡುಪಿಗೆ ಪ್ರಕರಣದ ವಿಚಾರಣೆಗೆ ಕೋರ್ಟ್ ಹಾಜರಾದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗೌರಿ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಗೌರಿ ಹತ್ಯೆಯನ್ನು ನಕ್ಸಲರ ತಲೆಗೆ ಕಟ್ಟುವ ಕೆಲಸ ನಡೆಯುತ್ತಿದ್ದು, ನಕ್ಸಲರ ಕೃತ್ಯ ಎಂದು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದರು. ನಕ್ಸಲರಿಗೆ ಗೌರಿ ಲಂಕೇಶ್ ಅವರನ್ನು ಕೊಲ್ಲಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದರು.

    ನಕ್ಸಲ್ ಚಳುವಳಿಯಿಂದ ಮುಖ್ಯವಾಹಿನಿಗೆ ಸರಕಾರದ ಯಾವುದೇ ಪ್ಯಾಕೇಜ್ ಆಸೆಗೆ ಬಂದಿಲ್ಲ ಎಂದು ಹೇಳಿದರು. ಸರಕಾರದ ಸೌಲಭ್ಯ ಪಡೆದರೆ ನಮ್ಮ ಗೌರವಕ್ಕೆ ಕುತ್ತು ಬಂದಂತೆ ಎಂದರು. ಮುಖ್ಯವಾಹಿನಿಗೆ ಬಂದರು ಸರಕಾರ ನಮ್ಮ ಮೇಲಿನ ಯಾವುದೇ ಕೇಸ್ ಹಿಂಪಡೆದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply