Connect with us

    LATEST NEWS

    ಕುಂದಾಪುರದಲ್ಲಿ ಹಾವು ತಂದ ಸಾವು

    ಕುಂದಾಪುರದಲ್ಲಿ ಹಾವು ತಂದ ಸಾವು

    ಉಡುಪಿ, ಸೆಪ್ಟೆಂಬರ್ 23 : ಅಡ್ಡ ಬಂದ ಹಾವನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳಕೊಂಡ ಧಾರುಣ ಘಟನೆ ಉಡುಪಿ ಜಿಲ್ಲೆ ಕುಂದಾಪುದಲ್ಲಿ ಸಂಭವಿಸಿದೆ.

    ಕುಂದಾಪುರದ ಕೋಟೇಶ್ವರ ಬಳಿಯ ಕಾಳಾವರದಲ್ಲಿ ಈ ಘಟನೆ ನಡೆದಿದ್ದು, ಹಾಲಾಡಿ ನಿವಾಸಿ ಗಂಗಾಧರ ಅವರೇ ಮೃತ ದುರ್ದೈವಿಯಾಗಿದ್ದಾರೆ.
    ಹಾಲಾಡಿ – ಕೋಟೇಶ್ವರ ರಸ್ತೆಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಗಂಗಾಧರ ಅವರು ಏಕಾಎಕಿ ಬೈಕಿಗೆ ಹಾವೊಂದು ಅಡ್ಡ ಬಂದಿದೆ.

    ಹಾವನ್ನು ತಪ್ಪಿಸಲು ಗಂಗಾಧರ ಅವರು ಬ್ರೇಕ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು ಗಂಗಾಧರ ಅವರ ಬೈಕಿಗೆ ಡಿಕ್ಕಿ ಗುದ್ದಿದೆ.

    ಪರಿಣಾಮ ರಸ್ತೆಗೆ ಎಸೆಲ್ಪಟ್ಟ ಗಂಗಾಧರ ಅವರು ತೀವೃವಾಗಿ ಗಾಯಗೊಂಡು, ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮೃತ ಗಂಗಾಧರ ಹಾಲಾಡಿ ಗ್ಯಾರೆಜ್ ಮಾಲಕ ರುದ್ರ ಅಚಾರ್ಯ ಅವರ ಮಗನಾಗಿದ್ದು, 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

    ಸ್ಥಳಿಯ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply