Connect with us

    DAKSHINA KANNADA

    ಒಡೆಯರ್ ಕುಟುಂಬಕ್ಕೆ ಸಂತಾನ ಪ್ರಾಪ್ತಿ, ಹನುಮಗಿರಿ ಆಂಜನೇಯನಿಂದ ಅಲಮೇಲಮ್ಮ ಶಾಪಕ್ಕೆ ಮುಕ್ತಿ

    ಒಡೆಯರ್ ಕುಟುಂಬಕ್ಕೆ ಸಂತಾನ ಪ್ರಾಪ್ತಿ, ಹನುಮಗಿರಿ ಆಂಜನೇಯನಿಂದ ಅಲಮೇಲಮ್ಮ ಶಾಪಕ್ಕೆ ಮುಕ್ತಿ

    ಪುತ್ತೂರು,ಡಿಸೆಂಬರ್ 7: ಮೈಸೂರು ಮಹಾರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರಿಗೆ ಪುತ್ರ ಸಂತಾನವಾಗಿದೆ. ಇದರ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಅಂಜನೇಯನ ಕೃಪೆ ಇದೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ. ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ ಹನುಮಗಿರಿಗೆ ಬರುವ ಯದುವೀರ್ ಕಳೆದ ತಿಂಗಳು ಕೂಡಾ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಕೋದಂಡರಾಮ ಹಾಗೂ ಪಂಚಮುಖಿ ಹನುಮಂತನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೆ ಈ ಹಿಂದೆ ಮಹಾರಾಣಿ ಪ್ರಮೋದಾದೇವಿ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಜೊತೆಯೂ ಯದುವೀರ್ ಪಂಚಮುಖಿ ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪತ್ನಿ ತ್ರಿಷಿಕಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಯದುವೀರ್ ಪತ್ನಿಯ ಆರೋಗ್ಯದ ವಿಚಾರವಾಗಿ ಹಾಗೂ ಸಂತಾನದ ವಿಚಾರವಾಗಿಯೂ ವಿಶೇಷ ಪೂಜೆ ಸಲ್ಲಿಸಿದ್ದರು.

    ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪುತ್ರ ಸಂತಾನದ ಇಂಗಿತ ವ್ಯಕ್ತಪಡಿಸಿದ್ದ ಒಡೆಯರ್ ಕುಟುಂಬಕ್ಕೆ ಇದೀಗ ಪುತ್ರನ ಆಗಮನವಾಗಿದೆ. ಒಡೆಯರ ವಂಶಕ್ಕೆ ಕುಡಿಯಾಗದಿರಲಿ ಎನ್ನುವ ಅಲಮೇಲಮ್ಮನ ಶಾಪಕ್ಕೆ ಇಂದು ಆಂಜನೇಯ ಮುಕ್ತಿ ನೀಡಿದ್ದಾನೆ ಎನ್ನುವ ಮಾತುಗಳೂ ಇದೀಗ ಕೇಳಿ ಬರಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply