Connect with us

    DAKSHINA KANNADA

    ಕರ್ತವ್ಯ ನಿರತ ಪ್ರೊಬೇಷನರಿ ಎಸ್ಐ ಮೇಲೆ ಹಲ್ಲೆ ಯತ್ನ

    ಮಂಗಳೂರು ಅಗಸ್ಟ್ 7 : ಕರ್ತವ್ಯ ನಿರತ ಪ್ರೊಬೇಷನರಿ ಎಸ್ಐ ಮೇಲೆ ಹಲ್ಲೆ ಯತ್ನ ನಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ .ನಗರದ ಪಾಂಡೇಶ್ವರ ಠಾಣೆಯ ಪ್ರೊಬೇಷನರಿ ಎಸ್ಐ ರವಿ ಪವಾರ್ ಎಂಬವರು ಎಂದು ಸಂಜೆ ಜೆಪ್ಪು ವಿನ ಮಹಾಕಾಳಿ ಪಡ್ಪು ಎಂಬಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ .ಮಹಾಕಾಳಿ ಪಡ್ಪು ವಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಮ್ರಾನ್ ಎಂಬವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಇಮ್ರಾನ್ ಪ್ರೊಬೇಷನರಿ ಎಸ್ಐ ರವಿ ಪವಾರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ .ಈ ಹಿನ್ನೆಲೆಯಲ್ಲಿ ಇಮ್ರಾನ್ ಅವರನ್ನು ದಸ್ತಗಿರಿ ಮಾಡಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply