Connect with us

    DAKSHINA KANNADA

    ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ ಮೀನುಗಾರಿಕಾ ಬೋಟ್ ಮುಳುಗಡೆ, ಒರ್ವ ನೀರು ಪಾಲು

    ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ ಮೀನುಗಾರಿಕಾ ಬೋಟ್ ಮುಳುಗಡೆ

    ಮಂಗಳೂರು, ಜುಲೈ 30: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರಿಕಾ ಬೋಟ್ ಒಂದು ಮುಳುಗಡೆ ಹೊಂದಿದೆ.
    ಮಂಗಳೂರಿನ ಮೀನಕಳಿಯ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಸಾಂಪ್ರದಾಯಿಕ ದೋಣಿಯ ಮೂಲಕ ಉಳ್ಳಾಲದಿಂದ ಮೀನುಗಾರಿಕೆಗೆ ಹೊರಟಿದ್ದರು. ಬೋಟ್ ಮುಳುಗಡೆ ಯಾಗುತ್ತಿರುವ ಅದೇ ಸಂದರ್ಭದಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ಬೋಟಿನ ಮೀನುಗಾರರು ಮುಳುಗುತ್ತಿರುವ ಬೋಟಿನಲ್ಲಿದ್ದವರ ರಕ್ಷಣೆಗೆ ಧಾವಿಸಿ ಒಟ್ಟು ಆರು ಜನರನ್ನು ಮೀನುಗಾರರು ರಕ್ಷಿಸಿದ್ದಾರೆ. ಒರ್ವ ಮೀನುಗಾರ ನೀರುಪಾಲಾಗಿದ್ದಾರೆ. ನೀರುಪಾಲಾದ ಮೀನುಗಾರನನ್ನು ಉಳ್ಳಾಲದ ನಿವಾಸಿ ಪ್ರೇಮನಾಥ ಎಂದು ಗುರುತಿಸಲಾಗಿದೆ. ಉಳಿದ ನೀರುಪಾಲಾಗಿರುವ ಮೀನುಗಾರನ ಶೋಧ ಕಾರ್ಯ ತಟರಕ್ಷಣಾ ಪಡೆಯಿಂದ ನಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply