LATEST NEWS
ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ
ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ
ಉಡುಪಿ ನವೆಂಬರ್ 20: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಭೇಟಿ ನೀಡಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ತೆರಳಿದ್ದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ನನಗೆ ಮಠದಿಂದ ಆಹ್ವಾನ ಬಂದಿಲ್ಲ ಅದಕ್ಕಾಗಿ ನಾನು ಶ್ರೀಕೃಷ್ಣ ಮಠಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದರು.
ಈ ಬಗ್ಗೆ ಸ್ಪಷ್ಠೀಕರಣ ನೀಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಯವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಭೇಟಿ ನೀಡಲು ಹಲವು ಬಾರಿ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದರು. ಹಲವು ಭಾರಿ ಆಹ್ವಾನ ನೀಡಿದರೂ ಬರೆದ ಇದ್ದದರಿಂದ ಈ ಭಾರಿ ಆಹ್ವಾನ ನೀಡಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಸಕ್ತಿಯಿಲ್ಲ ಎಂದ ಮೇಲೆ ಈ ಬಾರಿ ಆಹ್ವಾನ ನೀಡಿ ಪ್ರಯೋಜನ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.
ನಮಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ನಡುವೆ ಹಲವು ಭೇಟಿಗಳಾಗಿವೆ ಎಂದ ಶ್ರೀಗಳು, ಬುದ್ಧಿ ಜೀವಿಗಳು ಮುಖ್ಯಮಂತ್ರಿಗಳ ಮೇಲೆ ಮಠಕ್ಕೆ ಹೋಗಬೇಡಿ ಎಂದು ಒತ್ತಡ ಹೇರುತ್ತಾರೆ ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಮಠಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಅಂದ್ರೆ ಆಗಲ್ಲ ಹಾಗೆ ಪೇಜಾವರ ಶ್ರೀ ಅಂದ್ರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಎಂದು ಹೇಳಿದರು.
Facebook Comments
You may like
ಗೋಮಾಳದ ಭೂಮಿಯನ್ನು ಗೋಶಾಲೆಗಳಿಗೆ ನೀಡಲು ಕಂದಾಯ ಮಂತ್ರಿ ಅಸ್ತು
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಪೇಜಾವರ ಶ್ರೀ ವಿಶ್ವೇಶತೀರ್ಥರು ಕಾಲವಾಗಿ ಒಂದು ವರ್ಷ…..
ಉಡುಪಿ – ದೀರ್ಘದಂಡ ನಮಸ್ಕಾರ ಮೂಲಕ ಕೆಎಸ್ ಆರ್ ಟಿಸಿ ಮೆಕ್ಯಾನಿಕ್ ನಿಂದ ವಿಭಿನ್ನ ರೀತಿ ಪ್ರತಿಭಟನೆ
ಶಿರೂರು ಮಠಕ್ಕೆ ಶೀಘ್ರ ಉತ್ತರಾಧಿಕಾರಿ ನೇಮಕ – ದ್ವಂದ್ವ ಮಠಾಧೀಶ ಸೋದೆ ವಿಶ್ವವಲ್ಲಭ ತೀರ್ಥರಿಂದ ಘೋಷಣೆ
ಉಡುಪಿ ಕೃಷ್ಣ ಮಠದ ಮಹಾದ್ವಾರದಲ್ಲಿ ಕನ್ನಡ ನಾಮಫಲಕ
You must be logged in to post a comment Login