Connect with us

    LATEST NEWS

    ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ

    ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ

    ಉಡುಪಿ ನವೆಂಬರ್ 20: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಭೇಟಿ ನೀಡಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ತೆರಳಿದ್ದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ನನಗೆ ಮಠದಿಂದ ಆಹ್ವಾನ ಬಂದಿಲ್ಲ ಅದಕ್ಕಾಗಿ ನಾನು ಶ್ರೀಕೃಷ್ಣ ಮಠಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದರು.

    ಈ ಬಗ್ಗೆ ಸ್ಪಷ್ಠೀಕರಣ ನೀಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಯವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಭೇಟಿ ನೀಡಲು ಹಲವು ಬಾರಿ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದರು. ಹಲವು ಭಾರಿ ಆಹ್ವಾನ ನೀಡಿದರೂ ಬರೆದ ಇದ್ದದರಿಂದ ಈ ಭಾರಿ ಆಹ್ವಾನ ನೀಡಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಸಕ್ತಿಯಿಲ್ಲ ಎಂದ ಮೇಲೆ ಈ ಬಾರಿ ಆಹ್ವಾನ ನೀಡಿ ಪ್ರಯೋಜನ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.

    ನಮಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ನಡುವೆ ಹಲವು ಭೇಟಿಗಳಾಗಿವೆ ಎಂದ ಶ್ರೀಗಳು, ಬುದ್ಧಿ ಜೀವಿಗಳು ಮುಖ್ಯಮಂತ್ರಿಗಳ ಮೇಲೆ ಮಠಕ್ಕೆ ಹೋಗಬೇಡಿ ಎಂದು ಒತ್ತಡ ಹೇರುತ್ತಾರೆ ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಮಠಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಅಂದ್ರೆ ಆಗಲ್ಲ ಹಾಗೆ ಪೇಜಾವರ ಶ್ರೀ ಅಂದ್ರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply