ದೇಶದ ಆರ್ಥಿಕತೆಗೆ ಮೀನುಗಾರರ ಕೊಡುಗೆ ಅತ್ಯಮೂಲ್ಯವಾದುದು. ಆದ್ರೆ ನಾಡಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕೆಯ ಮಂಗಳೂರು ಮೀನುಗಾರಿಕಾ ಬಂದರಿನ ಸ್ಥಿತಿ ಮಾತ್ರ ದಯನೀಯವಾಗಿದೆ.
ಮಂಗಳೂರು : ದೇಶದ ಆರ್ಥಿಕತೆಗೆ ಮೀನುಗಾರರ ಕೊಡುಗೆ ಅತ್ಯಮೂಲ್ಯವಾದುದು. ಆದ್ರೆ ನಾಡಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕೆಯ ಮಂಗಳೂರು ಮೀನುಗಾರಿಕಾ ಬಂದರಿನ ಸ್ಥಿತಿ ಮಾತ್ರ ದಯನೀಯವಾಗಿದೆ.
ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಂಗಳೂರಿನ ಮೀನುಗಾರಿಕೆ ಧಕ್ಕೆ ಅಕ್ಷರಶ ಜೀರ್ಣಾವಸ್ಥೆಗೆ ತಲುಪಿದೆ. ಅಧಿಕಾರಿಗಳು, ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಮೀನುಗಾರರಲ್ಲಿ ಕಡಿಮೆಯಾಗಿರುವ ಹೋರಾಟದ ಮನೋಭಾವ ಇದಕ್ಕೆ ಕಾರಣ ಎನ್ನಲಾಗಿದೆ. ಮೂರು ಸಾವಿರಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಿರುವ ಈ ಬಂದರಿನ ಜೆಟ್ಟಿಯ ಹಲವು ಭಾಗಗಳು ಕುಸಿದು ನೀರುಪಾಲಾಗಿದೆ. ಉಳಿದವು ಅವ್ಯವಸ್ಥೆಯಿಂದ ಕೂಡಿದೆ. ನಾಡದೋಣಿ, ನದಿದೋಣಿ ಮೀನುಗಾರರಿಗೆ, ಕರೆ ಮರ ಬೋಟ್ ಕಟ್ಟಲು ಧಕ್ಕೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ.
ಈ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 8 ರ ಜನರ ನಡಿಗೆ ಉತ್ತಮ ಬದುಕಿನ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲೆಯ ವಿವಿಧ ಸಮಸ್ಯೆಗಳ ಬೇಡಿಕೆಗೆ ಆಗ್ರಹಿಸಿ ಮಂಗಳೂರಿನಲ್ಲಿ ನಡೆಯುವ CPIM ದಕ್ಷಿಣ ಕನ್ನಡ ಜಿಲ್ಲಾ ಹೋರಾಟದ ಪ್ರಚಾರದ ಭಾಗವಾಗಿ ಮಂಗಳೂರಿನ ವಿವಿಧ ಭಾಗದಲ್ಲಿ ವಾಹನ ಪ್ರಚಾರ ಜಾಥ ಕಾರ್ಯಕ್ರಮ ನಡೆಯಲಿದ್ದು ಧಕ್ಕೆಯಲ್ಲಿಯೂ ಪ್ರಚಾರ ಮಾಡುವುದನ್ನು ನಿರ್ಧರಿಸಿದೆ. ಹಲವು ಮಿನುಗಾರರು,ಕಾರ್ಮಿಕರು, ದುಡಿಯುವವರು ನಾಡದೋಣಿಯವರು ಹೋರಾಟಕ್ಕೆ ಬೆಂಬಲವಾಗಿದ್ದಾರೆ.
ಆದ್ರೆ ಇದಕ್ಕೆ ಕೆಲ ಮೀನುಗಾರಿಕೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಸಮಸ್ಯೆಗೆ ಪರಿಹಾರಕ್ಕೆ ಆಗ್ರಹಿಸಿ ಸಿಪಿಎಂ ಪಕ್ಷವು ಡಿ.8ರಂದು ಧರಣಿ ನಡೆಸುವುದಾಗಿ ಘೋಷಿಸಿದೆ. ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮೀನುಗಾರರದ್ದೇ ಸಂಘಟನೆಗಳಿವೆ. ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ. ಸಿಪಿಎಂ ಧರಣಿಗೆ ಮೀನುಗಾರರ ಬೆಂಬಲ ಇಲ್ಲ ಎಂದು ಮೀನುಗಾರರ ವಿವಿಧ ಸಂಘಟನೆಗಳ ಪ್ರಮುಖರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ ಮೀನುಗಾರರಿಗೆ ಸಹಾಯ ಮಾಡುತ್ತಾ ಬಂದಿದೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈವರೆಗೆ ಸ್ಥಗಿ ತಗೊಂಡಿರುವ ಕಾಮಗಾರಿಗಳನ್ನು ಈಗಿನ ಸರಕಾರ ಮುತುವರ್ಜಿ ವಹಿಸಿ ಮಾಡುತ್ತಿದೆ. ಈಗಾಗಲೇ ಬಂದರಿನ 1 ಮತ್ತು 2ನೇ ಹಂತದ ಕಾಮಗಾರಿಗೆ 37.50 ಕೋಟಿ ರೂ. ಹಾಗೂ 3ನೇ ಹಂತದ ಕಾಮಗಾರಿಗೆ 49.50 ಕೋಟಿ ರೂ. ಮಂಜೂರು ಮಾಡಿದ್ದು, ಕೆಲಸ ಮುಂದುವರಿದಿದೆ. ಅಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನೀಡದ ಕರರಹಿತ ಡೀಸೆಲ್ನ್ನು ಸರಕಾರ ನೀಡುತ್ತಿದ್ದು, ಮೀನುಗಾರರಿಗೆ ದೊಡ್ಡ ಸಹಾಯ ದೊರೆತಿದೆ. ಆದ್ದರಿಂದ ಮೀನುಗಾರರ ವಿಚಾರದಲ್ಲಿ ರಾಜಕೀಯ ಪಕ್ಷವೊಂದು ಮೂಗು ತೂರಿಸಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐಎಂ ಮೀನುಗಾರರ ಗಂಭೀರ ಸಮಸ್ಯೆಗಳು, ಧಕ್ಕೆಯ ದುರವಸ್ಥೆಯ ಕುರಿತು ಧ್ವನಿ ಎತ್ತಬೇಕಾದ ಸಂಘ ಸಂಸ್ಥೆಗಳು ತರಾತುರಿಯಲ್ಲಿ ಎಚ್ಚೆತ್ತು ಸರಕಾರದ ಪರ ಮಾತಾಡಲು ಹೊರಟಿರುವುದು ಉಚಿತ ಅಲ್ಲ ಎಂದಿದ್ದಾರೆ. ಮಂಗಳೂರು ಧಕ್ಕೆಯಲ್ಲಿ ಹಲವು ಸಮಸ್ಯೆಗಳನ್ನು ಮಿನುಗಾರರು ಧಕ್ಕೆಯಲ್ಲಿ ದುಡಿಯುವ ವಿಭಾಗ, ಕಾರ್ಮಿಕರು ಎದುರಿಸುತ್ತಿರುವ ವಿಚಾರವು ಕೂಡ ಡಿಸೆಂಬರ್ 8 ರ ಹೋರಾಟದ ಭಾಗವಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪ್ರೇರಿತ ಟ್ರಾಲ್ ಬೋಟ್ ಮತ್ತು ಪರ್ಸಿನ್ ಬೋಟ್ ಅಸೋಸಿಯೇಷನ್ ಪದಾಧಿಕಾರಿಗಳು ಹೋರಾಟ ನಡೆಯುವ ಮುಂಚೆಯೇ ಧಕ್ಕೆಯ ಅವ್ಯವಸ್ಥೆಯನ್ನು ಪ್ರಶ್ನಿಸಲು ಬಂದ ಕಮ್ಯುನಿಸ್ಟರ ಬಗ್ಗೆ ಆತಂಕಗೊಳಗಾಗಿದ್ದಾರೆ. ಅಧಿಕಾರದಲ್ಲಿದ್ದವರ ಭಯವಾ ಸಮಧಾನ ಪಡಿಸುವುದಾ ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದೆ.