Connect with us

LATEST NEWS

ಮಂಗಳೂರು ಜೈಲಿನಲ್ಲಿ ಖೈದಿಗಳ ಮಾರಾಮಾರಿ,ಒರ್ವ ಗಂಭೀರ : ಲಾಠಿ ಚಾರ್ಜ್

ಮಂಗಳೂರು ಜೈಲಿನಲ್ಲಿ ಖೈದಿಗಳ ಮಾರಾಮಾರಿ,ಒರ್ವ ಗಂಭೀರ : ಲಾಠಿ ಚಾರ್ಜ್

ಮಂಗಳೂರು, ಜನವರಿ 08 : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಒರ್ವ ಖೈದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ.

ಘಟನೆಯಲ್ಲಿ 10 ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಶಂಕೆ ವ್ಯಕ್ತ ಪಡಿಸಿದ್ದು, ಹಿರಿಯ ಪೋಲಿಸ್ ಅಧಿಕಾರಿಗಳು ಜೈಲಿಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಇತ್ತಂಡಗಳು ಹೊಡೆದಾಡಲು ಕಿಟಕಿಯ ಅಲ್ಯೂಮಿನಿಯಂ ಫ್ರೇಮ್, ಟ್ಯೂಬ್ ಲೈಟ್, ಕಲ್ಲು ಗಳನ್ನು ಬಳಸಿಕೊಂಡಿದ್ದಾರೆ.

ಡಿಸಿಪಿ ಹನುಮಂತರಾಯ, ಇನ್ಸ್ ಪೆಕ್ಟರ್ ಗಳಾದ ರವೀಶ್ ನಾಯಕ್, ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ್ ಸಹಿತ ಅನೇಕ ಅಧಿಕಾರಿಗಳು ಜೈಲಿಗೆ ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು.

ಮುಂಜಾಗೃತ ಕ್ರಮವಾಗಿ ಕಾರಾಗೃಹದ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *