Connect with us

DAKSHINA KANNADA

ನಕಲಿ ಚಿನ್ನ ಇಟ್ಟು ಬ್ಯಾಂಕಿಗೆ ಕೋಟ್ಯಾಂತರ ರೂ.ಗಳ ಪಂಗನಾಮ; ದಂಪತಿಗಳ ಬಂಧನ

ಮಂಗಳೂರು, ಜುಲೈ.26: ನಕಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿಗಳ ಪಂಗನಾಮ ಹಾಕಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ, ಈ ಸಂಬಂಧ ಮಂಗಳೂರಿನ ಬಂದರು ಪೋಲಿಸರು ನಗರದ ಬೊಂದೆಲಿನ ನಿವಾಸಿಗಳಾದ ವಿದ್ಯಾನಂದ ರಾವ್ ಮತ್ತು ಲಲಿತಾ ರಾವ್ ಅವರನ್ನು ಬಂಧಿಸಿದ್ದಾರೆ. ಪೋಲಿಸ್ ಮಾಹಿತಿಯಂತೆ ಇವರು ಮಂಗಳೂರಿನಲ್ಲಿ ಆಭರಣ ತಯಾರಿ ಅಂಗಡಿ ಹೊಂದಿದ್ದು , ನಗರದ ,ಮಿಲಾಗ್ರಿಸ್ ಬಳಿಯ ಕಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಸುಮಾರು ಆರು ಕೋಟಿ ರೂಪಾಯಿಗಳ ಸಾಲ ಪಡೆದ ಇವರ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿಗೆ ಶಂಶಯ ಬಂದು ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಕಂಚಿನ ಲೋಹಕ್ಕೆ ಚಿನ್ನದ ಲೇಪ ನೀಡಿದ ಆಭರಣ ಇದಾಗಿದ್ದು ಅದು ನಕಲಿ ಎಂದು ಗೊತ್ತಾಗಿದೆ. ಕೂಡಲೇ ಬಂದರು ಪೋಲಿಸ್ ಠಾಣೆಗೆ ಬ್ಯಾಂಕಿನ ಆಡಳಿತ ಮಂಡಳಿ ದೂರು ನೀಡಿದ್ದು ಇದೀಗ ವಂಚನೆ ಮಾಡಿದ ದಂಪತಿಗಳನ್ನು ಪೋಲಿಸರು ಬಂಧಿಸಿ ಮೊಕದ್ದಮೆ ದಾಖಲು ಮಾಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply