LATEST NEWS
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸುಳ್ಳು ಸುದ್ದಿ – ಶೋಭಾ ಕರಂದ್ಲಾಜೆ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸುಳ್ಳು ಸುದ್ದಿ – ಶೋಭಾ ಕರಂದ್ಲಾಜೆ
ಉಡುಪಿ ನವೆಂಬರ್ 16: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ದೇಶದ ಜನರು ಅಪೇಕ್ಷೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ವಿಶ್ವಾಸ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ದೇಶಾದ್ಯಂತ ಬೃಹತ್ ಸಮಾವೇಶ ಆಯೋಜಿಸಿದೆ. ಕೇಂದ್ರ ಸರ್ಕಾರ ರಾಮಮಂದಿರ ಕುರಿತಂತೆ ಸೂಕ್ತ ತಿರ್ಮಾನ ತೆಗೆದುಕೊಳ್ಳಲಿದೆ ಎಂದರು.
ಸುಪ್ರೀಮ್ ಕೋರ್ಟ್ ರಾಮಮಂದಿರ ನಿರ್ಮಾಣ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ನಿಧಾನಗತಿ ಮಾಡಬಾರದು, ಹಳೆಯ ಪುರಾತನ ಕೇಸುಗಳೆಲ್ಲ ಸುಪ್ರೀಂ ನಲ್ಲಿ ನಿರ್ಧಾರವಾಗಿದೆ. ದೇಶದ ಭಕ್ತರ ಭಾವನೆಗೆ ಕೋರ್ಟ್ ಸ್ಪಂದಿಸಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸುಳ್ಳು ಎಂದು ಹೇಳಿದ ಅವರು ಮಂಗಳೂರು ಬೈಠಕ್ ನಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ, ಇದು ಎಲ್ಲವೂ ಊಹಾಪೋಹ ಸುಳ್ಳು ಸುದ್ದಿ. ಈ ಸಂದರ್ಭ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಇವತ್ತಿನ ತನಕ ಚರ್ಚೆಯಾಗಿಲ್ಲ, ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು ಮಾಹಿತಿಯಿಂದಾಗಿದ್ದು, ಬಿಜೆಪಿಯನ್ನು ಅಭದ್ರಗಿಳಿಸಲು ಯತ್ನ ಷಡ್ಯಂತ್ರ ನಡೀತಿದೆ. ಇಂತಹ ಸುದ್ದಿ ಹಬ್ಬಿಸಿದವರು ಯಾರು ಎಂಬೂದು ಗೊತ್ತಾಗುತ್ತಿಲ್ಲ ಎಂದರು.
You must be logged in to post a comment Login